ಕೊಪ್ಪಳ ಆರ್ಟಿಒ ಕಚೇರಿಯಲ್ಲಿ ₹21,000 ಲಂಚ ಸ್ವೀಕರಿಸಿದ ಸಹಾಯಕ ಹಾಗೂ ಸಹಕರಿಸಿದ ಖಾಸಗಿ ವ್ಯಕ್ತಿ ಬಂಧನ..

ಕೊಪ್ಪಳ ಆರ್ಟಿಒ ಕಚೇರಿಯಲ್ಲಿ ₹21,000 ಲಂಚ ಸ್ವೀಕರಿಸಿದ ಸಹಾಯಕ ಹಾಗೂ ಸಹಕರಿಸಿದ ಖಾಸಗಿ ವ್ಯಕ್ತಿ ಬಂಧನ..
ಕೊಪ್ಪಳ, ಏಪ್ರಿಲ್ 29, 2026: ಕೊಪ್ಪಳದಲ್ಲಿ ಲೋಕಾಯುಕ್ತ ಪೊಲೀಸರು ಬಲೆ ಬೀಸಿ ₹21,000 ಲಂಚ ಸ್ವೀಕರಿಸಿದ ಆರ್ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕನನ್ನು ಹಾಗೂ ಲಂಚ ಸ್ವೀಕಾರಕ್ಕೆ ಸಹಕರಿಸಿದ ಖಾಸಗಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು 1) ಶ್ರೀ ರಂಜಿತ್ ಸಹಾಜಾನಂದ (30), ದ್ವಿತೀಯ ದರ್ಜೆ ಸಹಾಯಕ, ಆರ್ಟಿಒ ಕಚೇರಿ ಕೊಪ್ಪಳ, ಮೂಲ ನಿವಾಸಿ ಗಾಜರಗಾರಪೇಟೆ, ರಾಯಚೂರು, ಪ್ರಸ್ತುತ ಕಲ್ಯಾಣ ನಗರ, ಕೊಪ್ಪಳ, 2) ವಿನಯಕುಮಾರ (32), ರವಿಚಂದ್ರ ಡ್ರೈವಿಂಗ್ ಸ್ಕೂಲ್ನಲ್ಲಿ ಗುಮಾಸ್ತ, ಸರ್ದಾರಗಲ್ಲಿ, ಕೊಪ್ಪಳ ಎಂದು ಗುರುತಿಸಲಾಗಿದೆ.
ದೂರುದಾರರಾದ ಶ್ರೀ ನಯಿಮ್ ಅಕ್ರಮ್ ಕೆ.ಎಸ್. ಅವರು ಮೂರೂ ಶೋರೂಮ್ಗಳ ಪರವಾಗಿ ಟ್ರೇಡ್ ಲೈಸನ್ಸ್ ನೀಡುವ ಸಂಬಂಧ ಸಾಮಾನ್ಯ ಮುಕ್ತಿಯಾರ ಪತ್ರ (General Power of Attorney) ಪ್ರಕ್ರಿಯೆಗೆ ₹21,000 ಲಂಚದ ಬೇಡಿಕೆ ಇಟ್ಟು, ಫೋನ್ಪೇ ಮೂಲಕ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಲಂಚ ನೀಡಲು ಇಷ್ಟವಿಲ್ಲದ ಕಾರಣ ಅವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಶ್ರೀ ಸಿದ್ದರಾಜು ಸಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಶ್ರೀ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯನ್ನು ಪಿಐ ಶ್ರೀ ಸುನೀಲ್ ನಡೆಸುತ್ತಿದ್ದು, ಇನ್ಸ್ಪೆಕ್ಟರ್ಗಳಾದ ಚಂದ್ರಪ್ಪ ಪಿಐ ಹಾಗೂ ಶ್ರೀಮತಿ ಶೈಲಾ ಎಸ್. ಪಾಟಿಶೆಟ್ಟರ್ ಸೇರಿದಂತೆ ಸಿಬ್ಬಂದಿ ತಂಡ ಭಾಗವಹಿಸಿದೆ.ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.



